ಭಾನುವಾರ, ಅಕ್ಟೋಬರ್ 20, 2013

ವೆಂಕಟೇಶ್ ಅವರ ಮನೆ ಕಾರ್ಯಕ್ರಮ- ೨೦/೧೦/೨೦೧೩

೨೦ ನೇ ಅಕ್ಟೋಬರ್ ತಿಂಗಳ ಸಂಜೆ ನಮ್ಮ ಬಡಾವಣೆಯ ವೆಂಕಟೇಶ್ ದಂಪತಿಗಳ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸುಮಾರು ೭೦ ಜನರು ಸೇರಿದ್ದರು. ಶ್ರೀಮತಿ ಪದ್ಮಿನಿ ವಿನಯ ಶಾಸ್ತ್ರಿಯವರ ಸುಗಮ ಸಂಗೀತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಅವರು ಹೇಳಿದ ೫ ಹಾಡುಗಳು ಇಷ್ಟು ಬೇಗಮುಗಿಯಿತೇ ಅನಿಸುವಷ್ಟು ಇಂಪಾಗಿತ್ತು.
ನಂತರದ ಕಾರ್ಯಕ್ರಮ ನೀರಾವರಿ ತಜ್ಞ ನಮ್ಮ ಬಡಾವಣೆಯಲ್ಲೇ ವಾಸವಿರುವ,ಪತ್ರಕರ್ತ,ಆಂಕಣಕಾರ ರಾಧಾಕೃಷ್ಣ ಭಡ್ತಿಯವರ  ಉತ್ತರಾಕಾಂಡದ ಪ್ರತ್ಯಕ್ಷ ಅನುಭವಗಳು. ಅವರು ಅಲಕನಂದಾ, ಭಾಗೀರಥಿ ಮಂದಾಕಿನಿ ನದಿಗಳ ಹರಿವು, ಹರಿವಿನ ಹಿಂದಿರುವ ಹಲವಾರು ವಿಷಯಗಳ ಬಗ್ಗೆ ಕೂಲಂಕಷವಾಗಿ ಉಪಮೆಗಳೊಂದಿಗೆ ವಿವರಿಸಿದಾಗ ಬೆಚ್ಚಿ ಬಿದ್ದೆವು. ಹೀಗೂ ಉಂಟೇ ಅನ್ನಿಸಿತು. ಪ್ರಕೃತಿ ಮುನಿಸಿದರೆ ಏನಾಗಬಹುದೆಂದು ನಮಗೆ ತಿಳಿದಿತ್ತು ಆದರೆ ಸುಮ್ಮನೆ ಪ್ರಕೃತಿ ನಮಗೆ ಕೇಡು ಬಗೆಯುವುದಿಲ್ಲ ಎಂಬ ತಿಳಿವಳಿಕೆಗೆ ಹೇಳಿದರು. ಪ್ರಕೃತಿಗೆ ಆದ, ಆಗುತ್ತಿರುವ ತೊಂದರೆಗಳು ಏನು ಎಂದು ವಿಶದವಾಗಿ ವಿವರಿಸಿದರು. ಜಲ ಪ್ರಳಯದಿಂದಾದ ಅನಾಹುತಗಳು, ಅದಕ್ಕಾಗಿ ಮಾಡಿದ ಪರಿಹಾರಕಾರ್ಯಗಳನ್ನು ತಿಳಿಸಿದಾಗ ಜನ ಅವಾಕ್ಕಾದರು. ಇದರ ಬಗ್ಗೆ ತಿಳಿಸಲು ಒಂದು ಸಪ್ತಾಹವನ್ನಾದರೂ ಏರ್ಪಡಿಸಬೇಕೆಂಬ ತೀರ್ಮಾನದೊಂದಿಗೆ ಮನೆಯೊಡೆಯ ವೆಂಕಟೇಶ್ ಎಲ್ಲರಿಗೂ ವಂದನೆ ಅರ್ಪಿಸಿದರು.ವೆಂಕಟೇಶ್ ಮನೆಯವರ ಆತಿಥ್ಯ  ಒತ್ತು ಶಾವಿಗೆ, ಗಸಗಸೆ ಪಾಯಸ ಇಂದೂ ನಮ್ಮ ನಾಲಿಗೆಯೊಳಗೆ ಬೇರುಬಿಟ್ಟಿದೆ ನಂತರ ಎಲ್ಲರನ್ನೂ ಬೀಳ್ಕೊಟ್ಟಾಗ  ರಾತ್ರಿ ೧೦ ಆಗಿತ್ತು.